ಕಾನೂನಿನ ಚೌಕಟ್ಟಿನಲ್ಲಿದ್ದ ಸಂಧರ್ಭದಲ್ಲಿ ವರ್ತೂರ್ ಸಂತೋಷ್ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು ಮಾತ್ರವಲ್ಲದೆ ಅವರ ಪರ ಹಾಗೂ ವಿರುದ್ದವಾಗಿ ಹಲವಾರು ಪ್ರತಿಭಟನೆಗಳು ನಡೆದದ್ದು ಕೂಡ ವಿಶೇಷ. ಸದ್ಯ ವರ್ತೂರ್ ಕಾನೂನಿನ ಪರಿದಿಯೊಳಗೆ ಹೋರಾಟ ನಡೆಸಿ ಮತ್ತೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಒಮ್ಮೆ ಹೊರಬಂದು ಮತ್ತೇ ಬಿಗ್ ಬಾಸ್ ಮನೆಯೊಳಗೆ ಸೇರಿದ ಹಳ್ಳಿಕಾರ್ ಒಡೆಯನ ಆಟ ಹೇಗಿರುತ್ತದೆ ಎಂಬುದನ್ನು ನೋಡಲು ಕರ್ನಾಟಕದ ಜನತೆ ಹಾಗೂ ಬಿಗ್ ಬಾಸ್ ಪ್ರೇಕ್ಷಕರು ಕಾತುರರಾಗಿರುವುದು ಮಾತ್ರ ಸುಳ್ಳಲ್ಲ.
ಬಿಗ್ ಬಾಸ್ ಕಾರ್ಯಕ್ರಮದ ನಿಯಮದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳ ಬಳಿಕ ಸೋಮವಾರ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಪ್ರೇಕ್ಷಕರು ಮಂಗಳವಾರದ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಮನೆಗೆ ಮತ್ತೆ ಆಗಮನದ ನೋಟವನ್ನು ಕಾಣಬಹುದು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಸಂತೋಷ್ ಗೆ ಬಿಗ್ ಮನೆಮಂದಿ ಮತ್ತೊಂದು ಶಾಕ್ ನೀಡಿದ್ದಾರೆ. ವರ್ತೂರ್ ಸಂತೋಷ್ ಯಾವ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದರು ಎಂಬ ವಿಷಯ ಮನೆಮಂದಿಗೆ ತಿಳಿದಿಲ್ಲ. ವರ್ತೂರ್ ರೀ ಎಂಟ್ರಿಯ ಸಂಧರ್ಭದಲ್ಲಿ ಈ ಬಗ್ಗೆ ಮನೆಯ ಸದಸ್ಯರು ಪ್ರಶ್ನಿಸಿದ್ದಾರೆ, ಅದಕ್ಕೆ ಯಾವ ಉತ್ತರವನ್ನು ಹಳ್ಳಿಕಾರ್ ಒಡೆಯ ನೀಡಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಕಾಣಸಿಗಲಿದೆ. ಸಂತೋಷ್ ಆಗಮನದ ಸಣ್ಣ ತುಣಕನ್ನು ಬಿಗ್ ಬಾಸ್ ತಂಡ ಹಂಚಿಕೊಂಡಿದ್ದು ಇದರಲ್ಲಿ ಮತ್ತೊಂದು ಶಾಕ್ ಎದುರಾಗಿದೆ.
ವಾರದ ಮಧ್ಯದಿಂದ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದ ಸಂತೋಷ್ ಅವರನ್ನು ಈ ವಾರ ನಾಮಿನೇಶನ್ ಗೆ ಪರಿಗಣಿಸಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಯನ್ನು ಮನೆಮಂದಿಗೆ ಬಿಗ್ ಬಾಸ್ ಕೇಳಿದ್ದು ಇದಕ್ಕೆ ಬಹಳಷ್ಟು ಸದಸ್ಯರು 'ಹೌದು' ಎಂಬ ಉತ್ತರವನ್ನು ನೀಡಿದ್ದಾರೆ ಅಂತಿಮವಾಗಿ ಬಿಗ್ ಬಾಸ್ ಯಾವ ಟ್ವೀಸ್ಟ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾನೂನು ಹೋರಾಟದ ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವರ್ತೂರ್ ಸಂತೋಷ್ ಗೆ ಇದು ದೊಡ್ಡ ಶಾ'ಕ್ ನೀಡಿದಂತಾಗಿದೆ.
Comments
Post a Comment