Big Boss ಮನೆಯೊಳಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ವರ್ತೂರ್ ಸಂತೋಷ್ ಗೆ ಆರಂಭದಲ್ಲೇ ಬಿಗ್ ಶಾ'ಕ್.!


ನಮಸ್ಕಾರ ಗೆಳೆಯರೇ, ವರ್ತೂರ್ ಸಂತೋಷ್ ಈ ಹೆಸರು ಕಳೆದ ಎರಡು ವಾರಗಳಿಂದ ಕರ್ನಾಟಕದಲ್ಲಿ ಭಾರೀ ಸುದ್ದಿಯಲ್ಲಿದೆ. ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗುವ ಮೊದಲು ವರ್ತೂರು ಸಂತೋಷ್ "ಹಳ್ಳಿಕಾರ್ ಗೋ" ತಳಿಯ ಉಳಿಯುವಿಕೆಗಾಗಿ ಶೋಷಿಯಾಲ್ ಮೀಡಿಯಾದ ಮೂಲಕ ಸದ್ದು ಮಾಡಿ ಸುದ್ದಿಯಾಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರ ಪಡೆದು ಸುದ್ದಿಯಾಗಿದ್ದ ಹಳ್ಳಿಕಾರ್ ಒಡೆಯನಿಗೆ ಬಿಗ್ ಬಾಸ್ ಎಂಬ ವ್ಯಕ್ತಿತ್ವವನ್ನು ನಿರೂಪಿಸುವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದು ಮತ್ತೊಂದು ಸೌಭಾಗ್ಯದ ವಿಷಯವಾಗಿತ್ತು, ಅದರೆ ಅದೇ ಬಿಗ್ ಬಾಸ್ ಕಾರ್ಯಕ್ರಮದಿಂದ ತನಗೆ ತೊಂದರೆಯಾಗಬಹುದು  ಎಂಬುದನ್ನು ಅವರು ಎಂದಿಗೂ ಊಹಿಸಿರಲಿಕ್ಕಿಲ್ಲ. ಬಿಗ್ ಬಾಸ್ ಕಾರ್ಯಕ್ರಮದಿಂದ ನೇರವಾಗಿ ಅವರಿಗೆ ಯಾವುದೇ ತೊಂದರೆಯಾಗದಿದ್ದರು ಪರೋಕ್ಷವಾಗಿ ಕೆಲವು ವನ್ಯ ಜೀವಿ ಸಂರಕ್ಷಣೆಯ ಕಾಯ್ದೆಯನ್ನು ಸಂತೋಷ್ ಉಲ್ಲಂಘಿಸಿದ್ದಕ್ಕಾಗಿ ಕೆಲವು ದಿನಗಳ ಕಾಲ ಕಾನೂನು ಹೋರಾಟವನ್ನು ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. 

ಕಾನೂನಿನ ಚೌಕಟ್ಟಿನಲ್ಲಿದ್ದ ಸಂಧರ್ಭದಲ್ಲಿ ವರ್ತೂರ್ ಸಂತೋಷ್ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದರು ಮಾತ್ರವಲ್ಲದೆ ಅವರ ಪರ ಹಾಗೂ ವಿರುದ್ದವಾಗಿ ಹಲವಾರು ಪ್ರತಿಭಟನೆಗಳು ನಡೆದದ್ದು ಕೂಡ ವಿಶೇಷ. ಸದ್ಯ ವರ್ತೂರ್ ಕಾನೂನಿನ ಪರಿದಿಯೊಳಗೆ ಹೋರಾಟ ನಡೆಸಿ ಮತ್ತೇ ಬಿಗ್ ಬಾಸ್ ಮನೆ ಸೇರಿದ್ದಾರೆ. ಒಮ್ಮೆ ಹೊರಬಂದು ಮತ್ತೇ ಬಿಗ್ ಬಾಸ್ ಮನೆಯೊಳಗೆ ಸೇರಿದ ಹಳ್ಳಿಕಾರ್ ಒಡೆಯನ ಆಟ ಹೇಗಿರುತ್ತದೆ ಎಂಬುದನ್ನು ನೋಡಲು ಕರ್ನಾಟಕದ ಜನತೆ ಹಾಗೂ ಬಿಗ್ ಬಾಸ್ ಪ್ರೇಕ್ಷಕರು ಕಾತುರರಾಗಿರುವುದು ಮಾತ್ರ ಸುಳ್ಳಲ್ಲ. 

ಬಿಗ್ ಬಾಸ್ ಕಾರ್ಯಕ್ರಮದ ನಿಯಮದಂತೆ ಕೆಲವು ವೈದ್ಯಕೀಯ ಪರೀಕ್ಷೆಗಳ ಬಳಿಕ ಸೋಮವಾರ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. ಬಿಗ್ ಬಾಸ್ ಪ್ರೇಕ್ಷಕರು ಮಂಗಳವಾರದ ಸಂಚಿಕೆಯಲ್ಲಿ ವರ್ತೂರು ಸಂತೋಷ್ ಮನೆಗೆ ಮತ್ತೆ ಆಗಮನದ ನೋಟವನ್ನು ಕಾಣಬಹುದು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಆರಂಭದಲ್ಲಿ ಸಂತೋಷ್ ಗೆ ಬಿಗ್ ಮನೆಮಂದಿ ಮತ್ತೊಂದು ಶಾಕ್ ನೀಡಿದ್ದಾರೆ. ವರ್ತೂರ್ ಸಂತೋಷ್ ಯಾವ ಕಾರಣಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದರು ಎಂಬ ವಿಷಯ ಮನೆಮಂದಿಗೆ ತಿಳಿದಿಲ್ಲ. ವರ್ತೂರ್ ರೀ ಎಂಟ್ರಿಯ ಸಂಧರ್ಭದಲ್ಲಿ ಈ ಬಗ್ಗೆ ಮನೆಯ ಸದಸ್ಯರು ಪ್ರಶ್ನಿಸಿದ್ದಾರೆ, ಅದಕ್ಕೆ ಯಾವ ಉತ್ತರವನ್ನು ಹಳ್ಳಿಕಾರ್ ಒಡೆಯ ನೀಡಲಿದ್ದಾರೆ ಎಂಬುದು ಇಂದಿನ ಸಂಚಿಕೆಯಲ್ಲಿ ಕಾಣಸಿಗಲಿದೆ. ಸಂತೋಷ್ ಆಗಮನದ ಸಣ್ಣ ತುಣಕನ್ನು ಬಿಗ್ ಬಾಸ್ ತಂಡ ಹಂಚಿಕೊಂಡಿದ್ದು ಇದರಲ್ಲಿ ಮತ್ತೊಂದು ಶಾಕ್ ಎದುರಾಗಿದೆ.

ವಾರದ ಮಧ್ಯದಿಂದ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದ ಸಂತೋಷ್ ಅವರನ್ನು ಈ ವಾರ ನಾಮಿನೇಶನ್ ಗೆ ಪರಿಗಣಿಸಬೇಕೆ ಅಥವಾ ಬೇಡವೇ ಎಂಬ ಪ್ರಶ್ನೆಯನ್ನು ಮನೆಮಂದಿಗೆ ಬಿಗ್ ಬಾಸ್ ಕೇಳಿದ್ದು ಇದಕ್ಕೆ ಬಹಳಷ್ಟು ಸದಸ್ಯರು 'ಹೌದು' ಎಂಬ ಉತ್ತರವನ್ನು ನೀಡಿದ್ದಾರೆ ಅಂತಿಮವಾಗಿ ಬಿಗ್ ಬಾಸ್ ಯಾವ ಟ್ವೀಸ್ಟ್ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾನೂನು ಹೋರಾಟದ ಬಳಿಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ವರ್ತೂರ್ ಸಂತೋಷ್ ಗೆ ಇದು ದೊಡ್ಡ ಶಾ'ಕ್ ನೀಡಿದಂತಾಗಿದೆ.

ವನ್ಯಜೀವಿಗಳ ಸಂರಕ್ಷಣೆ; ನಮ್ಮ ನಿಮ್ಮೆಲ್ಲರ ಹೊಣೆ

Comments